ಕೆಜಿಗಟ್ಟಲೇ ಬಂಗಾರ, ಕೈಇಟ್ಟಲ್ಲೆಲ್ಲಾ ನೋಟು: ಸರ್ಕಾರಿ ಅಧಿಕಾರಿಗಳ ಮನೆ ನೋಡಿದ್ರೆ “ಲೋಕಾ” ಶಾಕ್!
ಬೆಂಗಳೂರು : ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ರಾಜ್ಯದ ನಾಲ್ವರು ಸರ್ಕಾರಿ ಅಧಿಕಾರಿಗಳ ಮನೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ನಿನ್ನೆ ಬೆಳಿಗ್ಗೆ ದಾಳಿ ನಡೆಸಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಪತ್ತೆಹಚ್ಚಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ನಡೆದ ಸಮನ್ವಯಿತ ಕಾರ್ಯಾಚರಣೆಯಲ್ಲಿ ಕರ್ನಾಟಕ ಸ್ಟೇಟ್ ಹೈವೇ ಡೆವಲಪ್ಮೆಂಟ್ ಪ್ರಾಜೆಕ್ಟ್ನ ಚೀಫ್ ಇಂಜಿನಿಯರ್ ಪುರುಷೋತ್ತಮ ದಾಸ ಹೆಗ್ಡೆ, ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀಕ್ಷಕ ಹೆಚ್.ಎಂ. ಜನಾರ್ದನ, ಬೆಸ್ಕಾಂ ಇಂಜಿನಿಯರ್ ಆರ್.ಎಚ್. ಅರ್ಜುನ್ ಮತ್ತು ಧಾರವಾಡ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸೋಮಲಿಂಗಪ್ಪ ಅವರ ಮನೆ, ಕಚೇರಿ ಹಾಗೂ ಸಂಬಂಧಿಕರ ನಿವಾಸಗಳ ಮೇಲೆ ದಾಳಿ ನಡೆಸಲಾಗಿದೆ.
ಬೆಂಗಳೂರು ಬನಶಂಕರಿಯಲ್ಲಿರುವ ಜನಾರ್ದನ ಅವರ ಮನೆಯಲ್ಲಿ ನಗದು, ಚಿನ್ನಾಭರಣ ಮತ್ತು ಆಸ್ತಿ ದಾಖಲೆಗಳು ವಶವಾಗಿದ್ದು, ಮೈಸೂರಿನಲ್ಲಿಯೂ ಮನೆಗಳು ಪತ್ತೆಯಾದವು. ಅವರ ಸ್ನೇಹಿತ ಸುಜಯ್ ಶೆಟ್ಟಿಯ ಮನೆಯಲ್ಲಿ 1.70 ಕೋಟಿ ರೂ. ನಗದು ಪತ್ತೆಯಾಗಿದ್ದು, ಹಣದ ಮೂಲ ಕುರಿತು ತನಿಖೆ ಮುಂದುವರಿಯುತ್ತಿದೆ. ಜನಾರ್ದನ ಅವರ ಆಸ್ತಿಯಲ್ಲಿ 12.77 ಲಕ್ಷ ಮೌಲ್ಯದ ಸೈಟ್, 2.40 ಕೋಟಿ ಮೌಲ್ಯದ ಮೂರು ಮನೆಗಳು, 34 ಎಕರೆ ಕೃಷಿ ಭೂಮಿ, 7 ಲಕ್ಷ ಮೌಲ್ಯದ ಚಿನ್ನ, 20 ಲಕ್ಷ ಮೌಲ್ಯದ ವಾಹನಗಳು ಹಾಗೂ 60 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಸೇರಿದ್ದು, ಒಟ್ಟು ಆಸ್ತಿ ಮೌಲ್ಯ 4.42 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ದಾವಣಗೆರೆಯಲ್ಲಿ ಬೆಸ್ಕಾಂ ಇಂಜಿನಿಯರ್ ಆರ್.ಎಚ್. ಅರ್ಜುನ್ ಅವರ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆದಿದ್ದು, ಶಿವಮೊಗ್ಗದ ಮನೆಯಲ್ಲಿ ಆಸ್ತಿ ದಾಖಲೆಗಳು, ಚಿನ್ನಾಭರಣ ಮತ್ತು ಬೆಳ್ಳಿ ವಸ್ತುಗಳು ವಶವಾಗಿವೆ. ಧಾರವಾಡ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸೋಮಲಿಂಗಪ್ಪ ಅವರ ಮನೆ, ಕಚೇರಿ ಮತ್ತು ಬೆಳಗಾವಿ ಜಿಲ್ಲೆಯ ಮುರಗೋಡದಲ್ಲಿರುವ ನಿವಾಸಕ್ಕೂ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಲಾಗಿದೆ. ಲೋಕಾಯುಕ್ತ ಅಧಿಕಾರಿಗಳು ವಶಪಡಿಸಿಕೊಂಡ ದಾಖಲೆಗಳ ಪರಿಶೀಲನೆ ಮುಂದುವರೆಸುತ್ತಿದ್ದು, ಸಂಪೂರ್ಣ ಆಸ್ತಿ ಮೌಲ್ಯದ ವಿವರ ಶೀಘ್ರದಲ್ಲೇ ಬಹಿರಂಗವಾಗುವ ಸಾಧ್ಯತೆ ಇದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳನ್ನು ಬಳಸಿ.
ಹುಬ್ಬಳ್ಳಿ
ಗಿರಣಿ ಚಾಳ ಬಳಿ ಲಾರಿ ನಿಯಂತ್ರಣ ತಪ್ಪಿ ಪಲ್ಟಿ – ಚಾಲಕನಿಗೆ ಗಾಯವಿಲ್ಲ
ಹುಬ್ಬಳ್ಳಿ: ಹುಬ್ಬಳ್ಳಿ ನಗರ ಗಿರಣಿ ಚಾಳ ಪ್ರದೇಶದಲ್ಲಿ ಬೆಳಗಿನ ಜ... ಓದನ್ನು ಮುಂದುವರಿಸಿ
ತುಮಕೂರಿನಲ್ಲಿ ಬೆಚ್ಚಿ ಬೀಳಿಸೋ ಘಟನೆ: ಜ್ಯೋತಿಷ್ಯದ ಮಾತು ನಂಬಿ ತಾಯಿಯನ್ನೇ ಉಸಿರುಗಟ್ಟಿಸಿ ಕೊಂದ ಮಗಳು!
ತುಮಕೂರು: ತಾಲ್ಲೂಕಿನ ಅನುಪನಹಳ್ಳಿ ಗ್ರಾಮದಲ್ಲಿ ಶೋಚನೀಯ ಘಟನೆ ನಡ... ಓದನ್ನು ಮುಂದುವರಿಸಿ
ಬಿಕ್ಲು ಶಿವ ಕೊಲೆ ಪ್ರಕರಣ: ಬೈರತಿ ಬಸವರಾಜ್ ಬೌರಿಂಗ್ ಆಸ್ಪತ್ರೆಗೆ ಮೆಡಿಕಲ್ ಟೆಸ್ಟ್, ನಂತರ ಕೋರ್ಟ್ಗೆ ಹಾಜರ್!
ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಂಧಿತರಾ... ಓದನ್ನು ಮುಂದುವರಿಸಿ
75 ಕೇಸ್ʼಗಳಲ್ಲಿ 85 ಆರೋಪಿಗಳು: ಬೆಂಗಳೂರು ಪೊಲೀಸ್ ಪ್ರಾಪರ್ಟಿ ಪರೇಡ್ನಲ್ಲಿ ಹೈಪರ್ ಡ್ರಾಮಾ!
ಬೆಂಗಳೂರು : ನಗರ ಉತ್ತರ ವಿಭಾಗದ ಪೊಲೀಸ್ ಇಲಾಖೆ ದರೋಡೆ ಮತ್ತು ಕಳ... ಓದನ್ನು ಮುಂದುವರಿಸಿ
ಅತಿವೇಗದ ಎಕ್ಸ್ಯುವಿ ಡಿಕ್ಕಿ: ಬೈಕ್ ಸವಾರ ಸೇರಿ 7 ಮಂದಿ ಸ್ಥಳದಲ್ಲೇ ಸಾವು
ಬೆಂಗಳೂರು: ನಗರದ ಹೊರವಲಯದ ಹೊಸಕೋಟೆ ಬಳಿ ಸಂಭವಿಸಿದ ಭೀಕರ ಸರಣಿ ಅ... ಓದನ್ನು ಮುಂದುವರಿಸಿ
“ಕೈಕಾಲು ತೊಳೆಯಲು ಹೋಗಿ ಕಾಲುವೆಗೆ ಜಾರಿ; ಇಬ್ಬರು ಮಹಿಳೆಯರು ಮೃತರು”
ರಾಯಚೂರು: ಲಿಂಗಸುಗೂರು ತಾಲ್ಲೂಕಿನ ಆನೆಹೊಸೂರು ಗ್ರಾಮದಲ್ಲಿ ಭತ್ತ... ಓದನ್ನು ಮುಂದುವರಿಸಿ
ದೇವನಹಳ್ಳಿ
ಕಾಫಿ ಟೋಕನ್ ಕಾರಣಕ್ಕೆ ಕಿರಿಕ್-“ಟೋಕನ್ ಕೇಳಿದ ಹೋಟೇಲ್ ಸಿಬ್ಬಂದಿಗೆ ಪೊಲೀಸ್ ದೌರ್ಜನ್ಯ
ದೇವನಹಳ್ಳಿ: ಕೆಂಪೇಗೌಡ ಏರ್ಪೋರ್ಟ್ ಬಳಿ ಸಂಭವಿಸಿದ ಘಟನೆ ಯಾರು ನ... ಓದನ್ನು ಮುಂದುವರಿಸಿ
ಮಂಗಳೂರು
ಮ್ಯಾಟ್ರಿಮೋನಿ ಮನ್ಮಥನ ಮೋಸ ಜಾಲ: 9 ಯುವತಿಯರಿಗೆ ವಂಚನೆ, ನಕಲಿ ಮಾವ ಬಂಧನ
ಮಂಗಳೂರು : ಆನ್ಲೈನ್ ಮ್ಯಾಟ್ರಿಮೋನಿ ಮೂಲಕ ಮದುವೆಯ ಹೆಸರಿನಲ್ಲಿ... ಓದನ್ನು ಮುಂದುವರಿಸಿ
ಚಿಕ್ಕೋಡಿ
ರಸ್ತೆ ಅಪಘಾತದಲ್ಲಿ 9 ವರ್ಷದ ಬಾಲಕಿ ಸಾವು! ಸ್ಥಳೀಯರಿಗೆ ರಸ್ತೆ ಸುರಕ್ಷತೆಯ ಎಚ್ಚರಿಕೆ
ಚಿಕ್ಕೋಡಿ/ಬೆಳಗಾವಿ:- ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಅಳಗ... ಓದನ್ನು ಮುಂದುವರಿಸಿ
ಆಲೂರು ಬಳಿ ಭೀಕರ ಅಪಘಾತ: ಖಾಸಗಿ ಬಸ್-ಕಾರು ಮುಖಾಮುಖಿ ಡಿಕ್ಕಿ
ರಾಯಚೂರು:- ರಾಯಚೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಗ್ರೀನ್ ಲೈ... ಓದನ್ನು ಮುಂದುವರಿಸಿ