ಪ್ರಯಾಣಿಕರಿಗೆ ಸಿಹಿ ಸುದ್ದಿ: ಯಶವಂತಪುರ–ತಾಳಗುಪ್ಪ ರೈಲು ಸೇರಿ 19 ಸೇವೆಗಳು ಖಾಯಂ

ಬೆಂಗಳೂರು: ರಾಜ್ಯದ ರೈಲು ಪ್ರಯಾಣಿಕರಿಗೆ ಸಂತಸದ ಸುದ್ದಿ ಲಭಿಸಿದೆ. ಪ್ರಯಾಣಿಕರ ಹೆಚ್ಚುತ್ತಿರುವ ಬೇಡಿಕೆಯನ್ನು ಪರಿಗಣಿಸಿ ರೈಲ್ವೇ ಮಂಡಳಿ ಕರ್ನಾಟಕದಲ್ಲಿ ಸಂಚರಿಸುತ್ತಿದ್ದ ಒಟ್ಟು 19 ವಿಶೇಷ ರೈಲುಗಳನ್ನು ಖಾಯಂ ಸೇವೆಗೆ ಪರಿವರ್ತಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಪಟ್ಟಿಯಲ್ಲಿ 6 ಎಕ್ಸ್‌ಪ್ರೆಸ್ ರೈಲುಗಳು, 9 ಮೆಮು/ಡೆಮು ಸೇವೆಗಳು ಹಾಗೂ 4 ಪ್ಯಾಸೆಂಜರ್ ರೈಲುಗಳು ಸೇರಿವೆ. ಈ ಕ್ರಮದಿಂದ ಬೆಂಗಳೂರು, ಮೈಸೂರು, ಶಿವಮೊಗ್ಗ ಸೇರಿದಂತೆ 15ಕ್ಕೂ ಹೆಚ್ಚು ಜಿಲ್ಲೆಗಳ ಜನರಿಗೆ ಪ್ರಯಾಣ ಸೌಲಭ್ಯ ಮತ್ತಷ್ಟು ಸುಧಾರಣೆಯಾಗಲಿದೆ.

 

ಇದುವರೆಗೆ ವಿಶೇಷ ರೈಲುಗಳಾಗಿ ಸಂಚರಿಸುತ್ತಿದ್ದ ಸೇವೆಗಳು ಹೆಚ್ಚಿದ ಟಿಕೆಟ್ ದರ ಮತ್ತು ಅನಿಶ್ಚಿತ ವೇಳಾಪಟ್ಟಿಯಿಂದ ಪ್ರಯಾಣಿಕರಿಗೆ ತೊಂದರೆ ಉಂಟುಮಾಡುತ್ತಿತ್ತು. ಇದೀಗ ಅವುಗಳನ್ನು ಖಾಯಂ ಸೇವೆಗೆ ಪರಿವರ್ತಿಸಿರುವುದರಿಂದ ದರ ಇಳಿಕೆ ಸಾಧ್ಯತೆ ಇದೆ. ಸ್ಲೀಪರ್ ಕೋಚ್‌ಗಳಲ್ಲಿ ಸುಮಾರು 30 ಶೇಕಡಾ ಹಾಗೂ ಸಾಮಾನ್ಯ ಟಿಕೆಟ್‌ಗಳಲ್ಲಿ 10 ರಿಂದ 15 ಶೇಕಡಾ ವರೆಗೆ ದರ ಕಡಿಮೆಯಾಗುವ ನಿರೀಕ್ಷೆ ವ್ಯಕ್ತವಾಗಿದೆ.

 

ಖಾಯಂ ಆದ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಮೈಸೂರು–ಅಜ್ಮೀರ್, ಬೆಂಗಳೂರು–ಕಲಬುರಗಿ, SMVT ಬೆಂಗಳೂರು–ಬೀದರ್, ಯಶವಂತಪುರ–ತಾಳಗುಪ್ಪ, ಹುಬ್ಬಳ್ಳಿ–ರಿಷಿಕೇಶ ಮತ್ತು ಮಡಗಾಂವ್–ಕಾರವಾರ ಮಾರ್ಗಗಳು ಸೇರಿವೆ. ಇದಲ್ಲದೆ, ಬೆಂಗಳೂರು–ಹೊಸೂರು, ಹುಬ್ಬಳ್ಳಿ–ವಿಜಯಪುರ ಸೇರಿದಂತೆ ಹಲವು ಮೆಮು/ಡೆಮು ರೈಲುಗಳು ಪ್ರತಿದಿನ ಮತ್ತು ವಾರದ ನಿರ್ದಿಷ್ಟ ದಿನಗಳಲ್ಲಿ ಸಂಚರಿಸಲಿವೆ. ಬೆಂಗಳೂರು–ಚನ್ನಪಟ್ಟಣ, ಮೈಸೂರು–SMVT ಬೆಂಗಳೂರು, ಯಶವಂತಪುರ–ಹಿಂದೂಪುರ ಹಾಗೂ ಹುಬ್ಬಳ್ಳಿ–ವಿಜಯಪುರ ಪ್ಯಾಸೆಂಜರ್ ರೈಲುಗಳನ್ನೂ ಖಾಯಂ ಸೇವೆಗೆ ಸೇರಿಸಲಾಗಿದೆ. ಈ ನಿರ್ಧಾರದಿಂದ ಪ್ರಯಾಣ ಯೋಜನೆ ಸುಲಭವಾಗಿದ್ದು, ಮುಂಗಡ ಕಾಯ್ದಿರಿಸುವಿಕೆ ಮಾಡಲು ಸಹ ಅನುಕೂಲವಾಗಲಿದೆ. ಒಟ್ಟಾರೆ, ರೈಲ್ವೇ ಮಂಡಳಿಯ ಈ ಕ್ರಮ ರಾಜ್ಯದ ಸಾವಿರಾರು ಪ್ರಯಾಣಿಕರಿಗೆ ಮಹತ್ವದ ನೆರವಾಗಲಿದೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

7 hours ago

   
Image 1
Image 1
ಬೆಂಗಳೂರು ನಗರ

“ಜೀರೋ ಕಾಸ್ಟ್” ಕ್ರೆಡಿಟ್ ಕಾರ್ಡ್ ಇಎಂಐ: ತಿಂಗಳ ಕಂತು ಕಡಿಮೆ, ಆದರೆ ಒಟ್ಟು ಪಾವತಿಸಬೇಕಾದ ಮೊತ್ತ ಹೆಚ್ಚಾಗಬಹುದು

ಇಂದಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ಶಾಪಿಂಗ್ ಹೆಚ್ಚುತ್ತಿರುವುದು ಸಾಮಾನ್ಯವಾಗ... ಓದನ್ನು ಮುಂದುವರಿಸಿ


Edited by: ಬಾನು

4 hours ago

   
Image 1
ಬೆಂಗಳೂರು ನಗರ

ಯುದ್ಧದ ಮಧ್ಯೆ ಚಿನ್ನದ ಬೆಲೆ ಇಳಿಕೆ : ಬಂಗಾರ ಪ್ರಿಯರಿಗೆ ಸುವಾರ್ತೆ

ಬೆಂಗಳೂರು: ಕೊಲ್ಲಿ ರಾಷ್ಟ್ರಗಳಲ್ಲಿ ಯುದ್ಧದ ಬಿಸಿ ನಡುವೆಯೇ ಬಂಗಾ... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1

"ಕಾರು, ಬಸ್, ಲಾರಿ ಎಲ್ಲರಿಗೂ ಟೋಲ್ ದರ ಏರಿಕೆ – Bengaluru-Mysuru Expressway ಸೇರಿದಂತೆ 8 ರಾಷ್ಟ್ರೀಯ ಹೆದ್ದಾರಿಗಳ ಮೇಲೆ ಪರಿಣಾಮ"

ನವದೆಹಲಿ: ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ದರಗಳಲ್ಲಿ ಸುಮಾರು 4–5% (ಸ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಎಟಿಎಂ ವಹಿವಾಟಿನಲ್ಲಿ ಬೃಹತ್ ಬದಲಾವಣೆ: ಏಪ್ರಿಲ್ 1ರಿಂದ ಹೊಸ ನಿಯಮಗಳು ಜಾರಿ

ದೆಹಲಿ : ಏಪ್ರಿಲ್ 1ರಿಂದ ಎಟಿಎಂ ವಹಿವಾಟುಗಳಿಗೆ ಸಂಬಂಧಿಸಿದಂತೆ ಹ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಸಿಲಿಕಾನ್ ವ್ಯಾಲಿ’ ಕೂಡ 5G ಹಿನ್ನಡೆ: ಗ್ರಾಮೀಣ ಹಳ್ಳಿಗಳು ಇನ್ನೂ ಕನೆಕ್ಷನ್ ಇಲ್ಲ

ಭಾರತದ ‘ಸಿಲಿಕಾನ್ ವ್ಯಾಲಿ’ ಎಂದೇ ಕರೆಯಲ್ಪಡುವ ಬೆಂಗಳೂರು ಕೇಂದ್ರದಲ್ಲಿದ್ದರೂ, ಕರ್ನಾ... ಓದನ್ನು ಮುಂದುವರಿಸಿ


Edited by: ಬಾನು

3 days ago

   
Image 1

ಭಾರತದಲ್ಲಿ ಹೊಸ ಆದಾಯ ತೆರಿಗೆ ನಿಯಮ : ಕ್ರೆಡಿಟ್ ಕಾರ್ಡ್‌ಗೆ ಹೊಸ ತೆರಿಗೆ ನಿಯಮ ಜಾರಿ!

ದೆಹಲಿ: ಮುಂಬರುವ ಹಣಕಾಸು ವರ್ಷದಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜ... ಓದನ್ನು ಮುಂದುವರಿಸಿ


Edited by: ಬಾನು

3 days ago

   
Image 1
ಬೆಂಗಳೂರು ನಗರ

ಮೆಟ್ರೋಗೆ ಜನರ ಮೆಚ್ಚುಗೆ: ಒಂದೇ ದಿನ 10.73 ಲಕ್ಷ ಪ್ರಯಾಣಿಕರ ದಾಖಲೆ

ಬೆಂಗಳೂರು: ಯುಗಾದಿ ಹಬ್ಬದ ಮುನ್ನದಿನ ನಮ್ಮ ಮೆಟ್ರೋ ಸೇವೆಯಲ್ಲಿ ಐ... ಓದನ್ನು ಮುಂದುವರಿಸಿ


Edited by: ಬಾನು

4 days ago

   
Image 1
ಬೆಂಗಳೂರು ನಗರ

ಬೆಂಗಳೂರು ಮೆಟ್ರೋ ಪಿಂಕ್ ಲೈನ್ ಮೇನಲ್ಲಿ ಆರಂಭ: ಡ್ರೈವರ್‌ಲೆಸ್ ರೈಲುಗಳ ಸಂಚಾರ

ಬೆಂಗಳೂರು: ನಗರದ ಮಹತ್ವಾಕಾಂಕ್ಷೆಯ ಪಿಂಕ್ ಲೈನ್ ಮೆಟ್ರೋ ಯೋಜನೆಯ... ಓದನ್ನು ಮುಂದುವರಿಸಿ


Edited by: ಬಾನು

4 days ago

   
Image 1
ಬೆಂಗಳೂರು ನಗರ

ಚಿನ್ನ ಮತ್ತೆ ಜಿಗಿತ: 22 ಕ್ಯಾರೆಟ್ ಬೆಲೆ ₹1.38 ಲಕ್ಷ ದಾಟಿತು!

ಬೆಂಗಳೂರು: ಚಿನ್ನದ ಬೆಲೆಯಲ್ಲಿ ನಿನ್ನೆ ಕಂಡುಬಂದ ಭಾರೀ ಇಳಿಕೆಯ ಬ... ಓದನ್ನು ಮುಂದುವರಿಸಿ


Edited by: ಬಾನು

4 days ago

   
Image 1
ಬೆಂಗಳೂರು ನಗರ

ಗ್ಯಾಸ್ ಸಿಲಿಂಡರ್ 14.2 KG ಯಾಕೆ ಫಿಕ್ಸ್? ತೂಕದ ಹಿಂದಿನ ಇತಿಹಾಸ ಮತ್ತು ಬಳಕೆಯ ಲಾಜಿಕ್‌!

ಬೆಂಗಳೂರು: ಅಡುಗೆ ಅನಿಲದ ಬಿಕ್ಕಟ್ಟಿನ ನಡುವೆ, ಗ್ಯಾಸ್ ಸಿಲಿಂಡರ್ ಮೇಲೆ ‘14.2 ಕೆಜಿ’... ಓದನ್ನು ಮುಂದುವರಿಸಿ


Edited by: ಬಾನು

5 days ago

   
Image 1