ವೀಲ್ಹಿಂಗ್ ಪ್ರಕರಣದಲ್ಲಿ ಪ್ರಭಾವಶಾಲಿಗಳಿಗೆ ವಿಶೇಷ ಸೌಲಭ್ಯ? ಜನರ ಕಾನೂನು ಸಮಾನತೆ ಆಗ್ರಹ"
ಬೆಂಗಳೂರು: ರಸ್ತೆ ಮೇಲೆ ವೀಲ್ಹಿಂಗ್ ಅಥವಾ ಅಪಾಯಕಾರಿ ಚಾಲನೆ ಮಾಡಿದರೆ ಸಾಮಾನ್ಯರಿಗೆ ಕೇಸು ದಾಖಲಾಗುವುದು, ಆದರೆ ಪ್ರಭಾವಶಾಲಿಗಳ ವಿಚಾರದಲ್ಲಿ ಪೊಲೀಸರು ಸಡಿಲ ಧೋರಣೆ ತೋರಿಸುತ್ತಿದ್ದಾರೆ ಎಂಬ ಆರೋಪಗಳು ನಗರದಲ್ಲಿ ಕೇಳಿಬರುತ್ತಿವೆ. ಇತ್ತೀಚೆಗೆ ನಗರದಲ್ಲಿ ಯಾರಾದರೂ ವೀಲ್ಹಿಂಗ್ ಅಥವಾ ಡೆಡ್ಲಿ ಡ್ರೈವಿಂಗ್ ಮಾಡಿದರೆ ಅವರನ್ನು ಪತ್ತೆಹಚ್ಚಿ, ಫೋಟೋ-ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.
ಆದರೆ, ಐಷಾರಾಮಿ ಕಾರಿನಲ್ಲಿ ಡ್ರಿಫ್ಟಿಂಗ್ ನಡೆಸಿದ ರಿಕ್ಕಿ ರೈ ಪ್ರಕರಣದಲ್ಲಿ ಪೊಲೀಸರ ವರ್ತನೆ ವಿರುದ್ಧ ಟೀಕೆ ವ್ಯಕ್ತವಾಗಿದೆ. ಎಂ.ಜಿ. ರಸ್ತೆಯ ಘಟನೆ ಸಂಬಂಧ ಪ್ರಕರಣ ದಾಖಲಿಸಲಾಯಿತು, ವಿಚಾರಣೆ ನಡೆಸಲಾಯಿತು; ಆದರೆ ಮಾಧ್ಯಮದ ಗಮನಕ್ಕೆ ಬರದಂತೆ ಹಿಂಬಾಗಿಲಿನಿಂದ ರಿಕ್ಕಿ ರೈ ಅವರನ್ನು ಹೊರಗೆ ಕಳುಹಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಈ ಬೆಳವಣಿಗೆಗೆ ಪ್ರತಿಕ್ರಿಯಿಸಿ, “ಸಾಮಾನ್ಯರಿಗೆ ಒಂದೇ ಕಾನೂನು, ಪ್ರಭಾವಶಾಲಿಗಳಿಗೆ ಮತ್ತೊಂದು ಕಾನೂನು?” ಎಂಬ ಪ್ರಶ್ನೆ ಎತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಎಲ್ಲಾ ಪ್ರಕರಣಗಳಲ್ಲಿ ಸಮಾನವಾಗಿ ಕಾನೂನು ಅನ್ವಯಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳನ್ನು ಬಳಸಿ.
ಐಷಾರಾಮಿ ಕಾರು ಡ್ರಿಫ್ಟಿಂಗ್ ಪ್ರಕರಣ – ರಿಕ್ಕಿ ರೈ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಹಾಜರಿ
ಬೆಂಗಳೂರು: ಐಷಾರಾಮಿ ಕಾರು ಡ್ರಿಫ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದ... ಓದನ್ನು ಮುಂದುವರಿಸಿ
ನೆಲಮಂಗಲ
ನೆಲಮಂಗಲದಲ್ಲಿ ಮನೆ ಕಳ್ಳತನ: ₹10 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ ಖದೀಮರು
ನೆಲಮಂಗಲ, ಬೆಂಗಳೂರು ಉತ್ತರ : ಮಾಚೋಹಳ್ಳಿ ಗ್ರಾಮದ ನವೀನ್ ಅವರ ಮನ... ಓದನ್ನು ಮುಂದುವರಿಸಿ
ಬೈಲಹೊಂಗಲ
“ದಾಂಪತ್ಯ ಕಲಹ ಭೀಕರ ರೂಪ : ಹೆಂಡತಿಯನ್ನು ಎಳೆದು ನಡುರಸ್ತೆಯಲ್ಲಿ ಕಲ್ಲಿನಿಂದ ಜಜ್ಜಿ ಹತ್ಯೆ”
ಬೆಳಗಾವಿ: ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಗೋವನಕೊಪ್ಪ ಗ... ಓದನ್ನು ಮುಂದುವರಿಸಿ
“ಮೊಬೈಲ್ ಪಾಸ್ವರ್ಡ್ ಕೊಡೋ ಮುನ್ನ ಎಚ್ಚರ: ಗೆಳೆಯನ ಫೋನ್ ಬಳಸಿ ₹4.5 ಲಕ್ಷ ಶಾಪಿಂಗ್ ಮಾಡಿದ ಪರಾರಿಯಾದ ಭೂಪ”
ಬೆಂಗಳೂರು : ಸ್ನೇಹಿತನಿಗೆ ಮೊಬೈಲ್ ಪಾಸ್ವರ್ಡ್ ನೀಡಿದ ಹಿನ್ನೆಲೆ... ಓದನ್ನು ಮುಂದುವರಿಸಿ
ನಕಲಿ ಆರ್ಡರ್-ಆಫರ್ ಲೆಟರ್: ಕೆಲಸದ ಆಮಿಷ ತೋರಿ ಕೋಟಿ-ಕೋಟಿ ವಂಚನೆ; ದಂಪತಿ ಅರೆಸ್ಟ್”
ಬಸವೇಶ್ವರನಗರ: ಕೋರ್ಟ್ನಲ್ಲಿ ಉದ್ಯೋಗ ನೀಡುವುದಾಗಿ ನಕಲಿ ವಾಗ್ದಾ... ಓದನ್ನು ಮುಂದುವರಿಸಿ
ಬೆಳ್ಳಂಬೆಳಗ್ಗೆ ಭೀಕರ ಅಪಘಾತ: ನಾಲ್ವರು ಸಾವು , ಬೆಂಗಳೂರು–ಮೈಸೂರು ಎಕ್ಸ್ಪ್ರೆಸ್ವೇಗೆ ಟ್ರಾಫಿಕ್ ಅಡ್ಡಿ
ರಾಮನಗರ : ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ವ್ಯಾಪ್ತಿಯಲ್ಲಿ ಬ... ಓದನ್ನು ಮುಂದುವರಿಸಿ
ಮಂಗಳೂರು
ಇನ್ಸ್ಪೆಕ್ಟರ್ ಸಂದೇಶ್ ವಿರುದ್ಧ ಅತ್ಯಾಚಾರ ಪ್ರಕರಣಕ್ಕೆ ಹೊಸ ತಿರುವು: ಸಂತ್ರಸ್ತೆಗೆ ಜೀವ ಬೆದರಿಕೆ ಆರೋಪ
ಮಂಗಳೂರು: ಮಂಗಳೂರು ಜಿಲ್ಲೆಯ ಮೂಡಬಿದ್ರೆ ಇನ್ಸ್ಪೆಕ್ಟರ್ ಸಂದೇಶ್... ಓದನ್ನು ಮುಂದುವರಿಸಿ
ಕಾಶಿ ಯಾತ್ರೆಗೆ ಹೊರಟ ಮಹಿಳೆಯರಿಗೆ ದುರಂತ: ದೇವನಹಳ್ಳಿ ಬಳಿ ಭೀಕರ ಅಪಘಾತ, ಮೂವರು ಸಾವು
ಚಿಕ್ಕಬಳ್ಳಾಪುರ: ಕಾಶಿ ಯಾತ್ರೆಗೆ ತೆರಳಲು ಹೊರಟಿದ್ದ ಮಹಿಳೆಯರ ಗು... ಓದನ್ನು ಮುಂದುವರಿಸಿ
ಯುಗಾದಿ ಫ್ಲೆಕ್ಸ್ ವಿವಾದ: ಭಾವಚಿತ್ರ ದುರುಪಯೋಗ ಬೇಡ – ಎಸ್ಪಿ ಶೋಭಾರಾಣಿ ಎಚ್ಚರಿಕೆ
ಮಂಡ್ಯ: ನಗರದಾದ್ಯಂತ ಯುಗಾದಿ ಶುಭಾಶಯಗಳ ಹೆಸರಿನಲ್ಲಿ ಅಳವಡಿಸಲಾದ... ಓದನ್ನು ಮುಂದುವರಿಸಿ
ಗಾಂಜಾ ಅಮಲಿನಲ್ಲಿ ಸ್ನೇಹಿತನ ಕೊಲೆ: ಶವ ಸುಟ್ಟು ಪರಾರಿ - ಬೆಚ್ಚಿಬೀಳಿಸಿದ ಹಾಸನ
ಹಾಸನ: ಹಾಸನ ತಾಲೂಕಿನ ನಿಟ್ಟೂರು ಸಮೀಪದ ಹಂಗರಹಳ್ಳಿ ತೋಟದ ಮನೆಯಲ್... ಓದನ್ನು ಮುಂದುವರಿಸಿ