ಪರಸಂಘ ಮಾಡಿದ್ದ ಜ್ಯೋತಿಷಿ ಜೊತೆ ಚಕ್ಕಂದ! ಅಕ್ರಮ ಸಂಬಂಧ ಮುಚ್ಚಲು ಕೊಲೆ : ಜ್ಯೋತಿಷಿ ಕಮಲಾಕರ ಭಟ್ ಸೇರಿದಂತೆ ಏಳು ಜನರ ಬಂಧನ
ದಿನ ಬೆಳಗಾದ್ರೆ ಈ ಜ್ಯೋತಿಷಿ ಕಮಲಾಕರ್ ಭಟ್ ಖಾಸಗಿ ವಾಹಿನಿಯಲ್ಲಿ ಕುಳಿತು, ನಿಮ್ಮ ಗ್ರಹಗತಿ ಸರಿಯಿಲ್ಲ, ನೀವು ಆ ಶಾಂತಿ, ಈ ಶಾಂತಿ ಮಾಡಿ, ಆ ದೇವರು, ಈ ದೇವರು ಪೂಜೆ ಮಾಡಿ ಎಂದು ಪುಂಗುತ್ತಿದ್ದ. ಜೊತೆಗೆ ನೀವು ಹೀಗಿರಬೇಕು. ಹಾಗಿರಬೇಕು. ಹೀಗಿದ್ರೆ ಹಾಗೆ ಆಗುತ್ತೆ.. ಹಾಗಿದ್ರೆ ಹೀಗೆ ಆಗುತ್ತೆ.. ಆ ಪೂಜೆ ಮಾಡಿ.. ಈ ಪೂಜೆ ಮಾಡಿ ಎಂದು ಜನಸಾಮಾನ್ಯರನ್ನು ದೇವರ ಹೆಸರಲ್ಲಿ ದಾರಿ ತಪ್ಪಿಸ್ತಿದ್ದ. ಆದರೆ, ತಾನು ಮಾತ್ರ ಅಕ್ರಮದ ಹಾದಿ ಹಿಡಿದಿದ್ದ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಅವರಗುಪ್ಪದ ಸುಚಿತ್ರಾಗೆ ಮದುವೆಯಾಗಿ ಎರುಡು ಮಕ್ಕಳಿದ್ದರು. ಗಂಡ ಮಹೇಶ್ ನಾಯ್ಕ್, ಬೆಂಗಳೂರಿನಲ್ಲಿ ಮಾಡುತ್ತಿದ್ದ. ಈಕೆ ಮಾತ್ರ ಜ್ಯೋತಿಷಿ ಕಮಲಾಕರ ಭಟ್ ತೆಕ್ಕೆಯಲ್ಲಿ ನಿತ್ಯ ತೇಲಾಡ್ತಿದ್ದಳು. ನಿತ್ಯ ಪೂಜೆ ನೆಪದಲ್ಲಿ ಸುಚಿತ್ರಾ ಮನೆಗೆ ಬರ್ತಿದ್ದ ಕಮಲಾಕರ್ ಭಟ್ ನಿತ್ಯವೂ ಪೂಜೆಯಲ್ಲಿ ತೊಡಗಿಕೊಳ್ತಿದ್ದ. ಇದರಿಂದ ಸುಚಿತ್ರಾ ಮೊದಲ ಮಗಳಿಗೆ ಇರಿಸು ಮುರಿಸು ಆಗ್ತಿತ್ತು. ಹೀಗಾಗಿ ಹಲವು ಬಾರಿ ತನ್ನ ಅಮ್ಮನ ಜೊತೆ ಜಗಳ ಕೂಡ ಮಾಡಿದ್ದಳು. ಆದರೆ ಸುಚಿತ್ರಾ ಮಾತ್ರ ತನ್ನ ವರ್ತನೆ ಬದಲಿಸಿಕೊಂಡಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ಹಿರಿಯ ಮಗಳು ಈ ವಿಚಾರವನ್ನ ತನ್ನ ತಂದೆಗೆ ತಿಳಿಸಿದ್ದಳು. ಊರಿಗೆ ಬಂದ ಗಂಡ ಮಹೇಶ್, ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದ. ಇದರಿಂದ ಕುಪಿತಗೊಂಡ ಸುಚಿತ್ರಾ, ತನ್ನ ತಂದೆ ಲೋಕನಾಥ್ ಮತ್ತು ಸಹಚರರು ಮಹೇಶ್ ನಾಯ್ಕ್ ಹಾಗೂ ಜೊತೆಗಿದ್ದವರ ಮೇಲೆ ಹಲ್ಲೆ ನಡೆಸಿದ್ದರು. ಘಟನೆಯಲ್ಲಿ ಸುಚಿತ್ರಾ ಪತಿ ಮಹೇಶ್, ವಸಂತ್ ನಾಯ್ಕ ಮತ್ತು ಕುಮಾರ್ ಗಂಭೀರ ಗಾಯಗೊಂಡಿದ್ದು, ಈ ಪೈಕಿ ವಸಂತ್ ನಾಯ್ಕ ಆಸ್ಪತ್ರೆ ಮಾರ್ಗ ಮಧ್ಯೆಯೇ ಮೃ*ತಪಟ್ಟಿದ್ದಾರೆ. ಉಳಿದ ಇಬ್ಬರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕೊ*ಲೆ ಬಳಿಕ ಪರಾರಿಯಾಗಲು ಯತ್ನಿಸಿದ ಜೋತಿಷಿ ಕಮಲಾಕರ ಭಟ್ ಮತ್ತು ಸುಚಿತ್ರಾ ಸೇರಿ ನಾಲ್ವರನ್ನು ಸಿದ್ದಾಪುರದಲ್ಲಿ ಬಂಧಿಸಲಾಗಿದ್ದರೆ. ಶಿವಮೊಗ್ಗದಲ್ಲಿ ಉಳಿದ ಮೂವರನ್ನು ವಶಕ್ಕೆ ಪಡೆದಿದ್ದಾರೆ. ದೇವರ ಹೆಸರು ಹೇಳುತ್ತಾ ಅನಾಚಾರ ಮಾಡುತ್ತಿದ್ದ ಕಮಲಾಕರ್ ಭಟ್ ಈಗ ಜೈಲು ಸೇರಿದ್ದಾನೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳನ್ನು ಬಳಸಿ.
ಸಿಂಧನೂರು
ಸಿಂಧನೂರು ರೈಲ್ವೇ ನಿಲ್ದಾಣದ ಬಳಿ ಯುವತಿಯ ಶವ ಪತ್ತೆ!
ಸಿಂಧನೂರು : ಸಿಂಧನೂರು ರೈಲ್ವೇ ನಿಲ್ದಾಣದ ಬಳಿ 21 ವರ್ಷದ... ಓದನ್ನು ಮುಂದುವರಿಸಿ
ಮಂಗಳೂರು
ಆಸ್ತಿ ವಿವಾದ : ತಂದೆ-ಚಿಕ್ಕಪ್ಪನ ಜಗಳ ಬಿಡಿಸಲು ಹೋದ ಮಗಳ ದಾರುಣ ಹತ್ಯೆ
ಮಂಗಳೂರು : ಆಸ್ತಿ ವಿವಾದವೊಂದು ಹೆತ್ತ ಮಗಳ ಕೊಲೆಯಲ್ಲಿ ಅಂತ್ಯವಾಗ... ಓದನ್ನು ಮುಂದುವರಿಸಿ
ಬೆಚ್ಚಿಬಿತ್ತು ಸಿಲಿಕಾನ್ ಸಿಟಿ : ಅನುಮಾನಾಸ್ಪದ ಸ್ಫೋಟಕ ವಸ್ತು ಪತ್ತೆ!
ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅನುಮಾನಾಸ್ಪದ ಸ್ಫೋ... ಓದನ್ನು ಮುಂದುವರಿಸಿ
ಸವದತ್ತಿ
10 ವರ್ಷ ಹಿಂದೆ ತಾಯಿ ಜತೆ ಓಡಿ ಹೋಗಿದ್ದವನನ್ನ ಕೊಲೆಗೈದ ಪುತ್ರ, ಶವದ ಮೇಲೆ ಕಾಲಿಟ್ಟು ಪೊಲೀಸರಿಗೆ ಕರೆ
ಸವದತ್ತಿ : ಹೆತ್ತ ತಾಯಿಯ ಮೇಲಿನ ಪ್ರೀತಿ ಮತ್ತು ಗೌರವಕ್ಕೆ ಧಕ್ಕೆ... ಓದನ್ನು ಮುಂದುವರಿಸಿ
ಸೆಂಟ್ರಲ್ ಕಮಾಂಡ್ ಸೆಂಟರ್ ಉದ್ಘಾಟಿಸಿದ ಗೃಹ ಮಂತ್ರಿ ಡಾ. ಜಿ. ಪರಮೇಶ್ವರ
ಬೆಂಗಳೂರು : ಕಾರಾಗೃಹಗಳಲ್ಲಿ ಕಾನೂನು ಬಾಹಿರ ಚಟುವ... ಓದನ್ನು ಮುಂದುವರಿಸಿ
ಹುಬ್ಬಳ್ಳಿ
ಕಿಮ್ಸ್ ಆಸ್ಪತ್ರೆಯ ಚಾಕು ಇರಿತ ಏಳು ಜನ ಆರೋಪಿಗಳನ್ನು ಅರೆಸ್ಟ್ ಮಾಡಿದ ಪೊಲೀಸರು
ಹುಬ್ಬಳ್ಳಿ: ಗಾಂಜಾ ವಿಚಾರಕ್ಕಾಗಿ ಕಿಮ್ಸ್ ಆಸ್ಪತ್ರೆಯಲ್ಲೇ ಚಾಕು... ಓದನ್ನು ಮುಂದುವರಿಸಿ
ಹುಬ್ಬಳ್ಳಿ
ಪತಿಯಿಂದ ಪತ್ನಿಯ ಬರ್ಬರ ಹತ್ಯೆ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ
ಹುಬ್ಬಳ್ಳಿ : ಪತಿಯಿಂದ ಪತ್ನಿಯ ಬರ್ಬರ ಹತ್ಯೆ ಚಾಕುವಿನಿಂದ ಇರಿದು... ಓದನ್ನು ಮುಂದುವರಿಸಿ
ಸಿ.ಜೆ ರಾಯ್ ಆತ್ಮಹತ್ಯೆ ಕೇಸ್ ತನಿಖೆಗೆ ಹೆಚ್ಚುವರಿ ಪೊಲೀಸ್ ಆಯುಕ್ತ ವಂಶಿಕೃಷ್ಣ ನೇತೃತ್ವದಲ್ಲಿ 'SIT' ರಚನೆ
ಬೆಂಗಳೂರು : ರಿಯಲ್ ಎಸ್ಟೇಟ್ ಉದ್ಯಮಿ ಸಿ.ಜೆ ರಾಯ್ ಅವರ ಆತ್ಮಹತ್ಯ... ಓದನ್ನು ಮುಂದುವರಿಸಿ
ಆನೇಕಲ್ ತಾಲ್ಲೂಕು
ಸ್ನೇಹಿತನಿಗೆ ಸ್ಕೆಚ್ ಹಾಕಿ ಹಣ ಸುಲಿಗೆ ಮಾಡಲು ಮಾಸ್ಟರ್ ಪ್ಲ್ಯಾನ್ ಮಾಡಿದ ಗೆಳೆಯರು..!
ಆನೇಕಲ್ : ಗೂಡ್ಸ್ ವಾಹನ ಮಾರಾಟ ಮಾಡಿ ಕ್ಯಾಬ್ ತೆಗೆದುಕೊಳ್ಳಲು ಪ... ಓದನ್ನು ಮುಂದುವರಿಸಿ
ಆನೇಕಲ್ ತಾಲ್ಲೂಕು
ಬೆಂಗಳೂರಿನಲ್ಲಿ ಸಿನಿಮಾ ಸ್ಟೈಲ್ ದರೋಡೆ; ಯುವಕನಿಗೆ ಲಾಂಗ್ ತೋರಿಸಿ 31 ಲಕ್ಷ ಲೂಟಿ..!
ಆನೇಕಲ್ : ಸಿಲಿಕಾನ್ ಸಿಟಿಯ ಹೊರವಲಯದಲ್ಲಿ ಹಾಡಹಗಲೇ ಭಯಾನಕ... ಓದನ್ನು ಮುಂದುವರಿಸಿ