ವಿಚ್ಛೇದನ ಸಿಕ್ಕ ಖುಷಿಯಲ್ಲಿ 9 ಕಿಮೀ ದೀಡ ನಮಸ್ಕಾರ: ಯುವಕನ ವಿಭಿನ್ನ ಹರಕೆ

ಲಕ್ನೋ: ವಿಚ್ಛೇದನವನ್ನು ಸಾಮಾನ್ಯವಾಗಿ ದುಃಖದ ಘಟನೆಯಾಗಿ ಕಾಣಲಾಗುತ್ತದೆ. ಆದರೆ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ನಡೆದ ಒಂದು ವಿಶಿಷ್ಟ ಘಟನೆ ಎಲ್ಲರ ಗಮನ ಸೆಳೆದಿದೆ. ನರ್ಖೋರಿಯಾ ಗ್ರಾಮದ ಜೋಗೇಶ್ (25) ಎಂಬ ಯುವಕ, ಪತ್ನಿಯಿಂದ ವಿಚ್ಛೇದನ ದೊರೆತ ಸಂತೋಷದಲ್ಲಿ ದೇವರಿಗೆ ಹರಕೆ ತೀರಿಸಲು ಸುಮಾರು 9 ಕಿಲೋಮೀಟರ್ ದೂರ ದೀಡ ನಮಸ್ಕಾರ ಹಾಕಿ ದೇವಸ್ಥಾನಕ್ಕೆ ತೆರಳಿದ್ದಾನೆ. ಈ ದೃಶ್ಯಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 

ನವರಾತ್ರಿ ಸಂದರ್ಭದಲ್ಲಿ ತನ್ನ ಗ್ರಾಮದಿಂದ ಬೈದಾ ಸಮಯ ಮಾತಾ ದೇವಸ್ಥಾನವರೆಗೆ ನೆಲದ ಮೇಲೆ ಸಾಷ್ಟಾಂಗ ನಮಸ್ಕಾರ ಮಾಡುತ್ತಾ ಜೋಗೇಶ್ ಪ್ರಯಾಣಿಸಿದ್ದಾರೆ. ಬೆಳಿಗ್ಗೆ ಆರಂಭವಾದ ಈ ಯಾತ್ರೆ ಸುಮಾರು 12 ಗಂಟೆಗಳ ಕಾಲ ಮುಂದುವರಿದಿದ್ದು, ಉಪವಾಸದಲ್ಲೇ ‘ಜೈ ಶ್ರೀರಾಮ್’ ಹಾಗೂ ‘ಜೈ ಬಜರಂಗಬಲಿ’ ಘೋಷಣೆಗಳೊಂದಿಗೆ ದೇವಸ್ಥಾನ ತಲುಪಿದ್ದಾರೆ.

 

2022ರಲ್ಲಿ ವಿವಾಹವಾದ ಜೋಗೇಶ್ ಅವರ ದಾಂಪತ್ಯ ಜೀವನದಲ್ಲಿ ಆರಂಭದಿಂದಲೇ ಕಲಹಗಳು ನಡೆದಿದ್ದು, ಕೊನೆಗೆ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. “ವಿಚ್ಛೇದನ ಸಿಕ್ಕರೆ ದೀಡ ನಮಸ್ಕಾರ ಮಾಡುತ್ತೇನೆ” ಎಂದು ಹರಕೆ ಹೊತ್ತಿದ್ದ ಅವರು, 2026ರ ಜನವರಿಯಲ್ಲಿ ವಿಚ್ಛೇದನ ಪೂರ್ಣಗೊಂಡ ನಂತರ ಹರಕೆ ತೀರಿಸಿದ್ದಾರೆ. ಯಾತ್ರೆಗೆ ಮುನ್ನ ಸ್ಥಳೀಯ ಆಡಳಿತದಿಂದ ಅನುಮತಿ ಪಡೆದಿದ್ದ ಜೋಗೇಶ್ ಅವರಿಗೆ ಪೊಲೀಸರು ಭದ್ರತೆ ಒದಗಿಸಿದ್ದರು. ಕುಟುಂಬ ಸದಸ್ಯರ ಜೊತೆ ದೇವಸ್ಥಾನ ತಲುಪಿದ ಅವರು ವಿಶೇಷ ಪೂಜೆ ಸಲ್ಲಿಸಿ ಉಪವಾಸ ಮುಗಿಸಿದರು.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

1 day ago

   
Image 1
Image 1

ಇಂಧನ ದರ ಏರಿಕೆ – ವಾಹನ ಮಾಲೀಕರಿಗೆ ಮತ್ತೊಂದು ಶಾಕ್

ನವದೆಹಲಿ: ಇಂಧನ ದರ ಏರಿಕೆ ಹಿನ್ನೆಲೆಯಲ್ಲಿ ವಾಹನ ಮಾಲೀಕರಿಗೆ ಮತ್... ಓದನ್ನು ಮುಂದುವರಿಸಿ


Edited by: ಬಾನು

5 hours ago

   
Image 1

ತಂದೆಯ ಮೇಲಿ ಸಿಟ್ಟಿಗೆ ಮಗು ಬಲಿ: ಕಾಲು ಹಿಡಿದು ತಲೆಯನ್ನ ರಸ್ತೆಗೆ ಚಚ್ಚಿದ ಪಾಪಿ!

ಮುಂಬೈ: ತಂದೆಯ ಮೇಲಿನ ವೈಮನಸ್ಸಿನ ಹಿನ್ನೆಲೆ, ನಾಲ್ಕು ವರ್ಷದ ಬಾಲ... ಓದನ್ನು ಮುಂದುವರಿಸಿ


Edited by: ಬಾನು

5 hours ago

   
Image 1

ರಸಗೊಬ್ಬರ, LPG, ಇಂಧನ ಸಾಕಷ್ಟು: ಆತಂಕ ಬೇಡ ಎಂದ ಕೇಂದ್ರ

ನವದೆಹಲಿ: ಇರಾನ್ ಸಂಬಂಧಿತ ಉದ್ವಿಗ್ನತೆಯ ಹಿನ್ನೆಲೆ ದೇಶದಲ್ಲಿ ಅಗ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಮಹಾವೀರ್ ಜಯಂತಿ: ಸಂಪ್ರತಿ ಸಂಗ್ರಹಾಲಯ ಉದ್ಘಾಟಿಸಿದ ಪ್ರಧಾನಿ ಮೋದಿ

ಗುಜರಾತ್: ಮಹಾವೀರ್ ಜಯಂತಿ ಪ್ರಯುಕ್ತ ಗಾಂಧಿನಗರದ ಕೋಬಾ ತೀರ್ಥದಲ್... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಭಾರತ ನಕ್ಸಲ್ ಮುಕ್ತತೆಗೆ ಹತ್ತಿರ: ಗೃಹ ಸಚಿವ ಅಮಿತ್ ಶಾ

ನವದೆಹಲಿ: ದೇಶದಲ್ಲಿ ನಕ್ಸಲ್ವಾದವು ಅಂತ್ಯದ ಹಂತಕ್ಕೆ ತಲುಪಿದ್ದು,... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಬಿಜೆಪಿ ಬಂದರೆ ‘ಲಕ್ಷ್ಮಿ ಭಂಡಾರ್’ ರದ್ದು: ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ: ಬಿಜೆಪಿ ಅಧಿಕಾರಕ್ಕೆ ಬಂದರೆ ಜನರಿಗೆ ನೀಡಲಾಗುತ್ತ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಭಾರತದಿಂದ ತುರ್ತು ನೆರವು: ಶ್ರೀಲಂಕಾ ಇಂಧನ ಕೊರತೆಗೆ 38,000 ಮೆಟ್ರಿಕ್ ಟನ್ ಪೂರೈಕೆ

ಕೊಲಂಬೋ: ಮಧ್ಯಪ್ರಾಚ್ಯ ಸಂಘರ್ಷದಿಂದ ಉಂಟಾದ ಇಂಧನ ಬಿಕ್ಕಟ್ಟಿನ ನಡ... ಓದನ್ನು ಮುಂದುವರಿಸಿ


Edited by: ಬಾನು

3 days ago

   
Image 1

ಹಾರುತ್ತಿದ್ದ ವಿಮಾನದಲ್ಲಿ ಎಮರ್ಜೆನ್ಸಿ ಡೋರ್‌ ತೆರೆಯಲು ಯತ್ನ: ವಿಚಾರಣೆಯಲ್ಲಿ ನನಗೆ ದೆವ್ವ ಹಿಡಿದಿದೆ ಎಂದ ಪ್ರಯಾಣಿಕ!

ಲಕ್ನೋ: ಬೆಂಗಳೂರಿನಿಂದ ವಾರಣಾಸಿಗೆ ತೆರಳುತ್ತಿದ್ದ ಇಂಡಿಗೋ ವಿಮಾನ... ಓದನ್ನು ಮುಂದುವರಿಸಿ


Edited by: ಬಾನು

3 days ago

   
Image 1

ನ್ಯಾಷನಲ್ ಇಂಡಸ್ಟ್ರೀಯಲಿಸ್ಟ್ ವಿಜಯಪತ್ ಸಿಂಘಾನಿಯಾ ನಿಧನ

ನವದೆಹಲಿ: ರೇಮಂಡ್ ಗ್ರೂಪ್‌ನ ಮಾಜಿ ಛೇರ್ಮನ್ ವಿಜಯಪತ್ ಸಿಂಘಾನಿಯಾ... ಓದನ್ನು ಮುಂದುವರಿಸಿ


Edited by: ಬಾನು

3 days ago

   
Image 1

ತಮಿಳುನಾಡು ಚುನಾವಣೆ ದಿನಗಣನೆ ಆರಂಭ: ನಟ-ರಾಜಕಾರಣಿ ವಿಜಯ್ ಸ್ಪರ್ಧೆ ಘೋಷಣೆ

ಚೆನ್ನೈ: ಏಪ್ರಿಲ್ 23ರಂದು ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನ... ಓದನ್ನು ಮುಂದುವರಿಸಿ


Edited by: ಬಾನು

3 days ago

   
Image 1