ಹೃದಯಾಘಾತ ಸಾವುಗೆ ಭೀಕರ ಟ್ವಿಸ್ಟ್.. 3ನೇ ಮದುವೆ ಆಸೆಗೆ 2ನೇ ಗಂಡನ ಹತ್ಯೆ! ಪತ್ನಿಯ ಖತರ್ನಾಕ್ ಪ್ಲಾನ್
ತುಮಕೂರು: ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದ್ದ ವ್ಯಕ್ತಿಯ ಸಾವಿಗೆ ಇದೀಗ ಭೀಕರ ತಿರುವು ಸಿಕ್ಕಿದ್ದು, ಪ್ರಕರಣ ಕೊಲೆ ಎಂದು ಬಹಿರಂಗವಾಗಿದೆ. ತುಮಕೂರು ತಾಲೂಕಿನ ಹೆಬ್ಬೂರು ಹೋಬಳಿಯ ದಾಸರಹಳ್ಳಿ ನಿವಾಸಿ ಪರಮೇಶ್ ಸಾವಿನ ಪ್ರಕರಣದಲ್ಲಿ ಈ ಬೆಳವಣಿಗೆ ಬೆಳಕಿಗೆ ಬಂದಿದೆ.
ಜನವರಿ 30ರಂದು ಪರಮೇಶ್ ಮೃತಪಟ್ಟಿದ್ದು, ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ಅವರ ಪತ್ನಿ ಆಶಾ ಕುಟುಂಬಸ್ಥರಿಗೆ ತಿಳಿಸಿದ್ದರು. ನಂತರ ತುರ್ತಾಗಿ ಅಂತ್ಯಕ್ರಿಯೆಯನ್ನೂ ನಡೆಸಲಾಗಿತ್ತು. ಆ ವೇಳೆ ಯಾವುದೇ ಅನುಮಾನ ವ್ಯಕ್ತವಾಗಿರಲಿಲ್ಲ.
ಆದರೆ ಗಂಡ ಸತ್ತ ಕೇವಲ 20 ದಿನಗಳಲ್ಲೇ ಆಶಾ ಮತ್ತೊಬ್ಬ ವ್ಯಕ್ತಿಯನ್ನು ಮದುವೆಯಾಗಿರುವುದು ಕುಟುಂಬದವರಿಗೆ ಅನುಮಾನ ಹುಟ್ಟಿಸಿತು. ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಪ್ರಕರಣದ ತನಿಖೆ ಆರಂಭಿಸಿದ ಹೆಬ್ಬೂರು ಪೊಲೀಸರು ಸತ್ಯ ಹೊರತಂದಿದ್ದಾರೆ.
ಪೊಲೀಸ್ ವಿಚಾರಣೆಯ ವೇಳೆ ಆಶಾ ತನ್ನ ಪ್ರಿಯಕರ ಚಂದ್ರಪ್ಪನೊಂದಿಗೆ ಹೊಂದಿದ್ದ ಸಂಬಂಧವನ್ನು ಒಪ್ಪಿಕೊಂಡಿದ್ದಾಳೆ. ಮೂರನೇ ಮದುವೆ ಮಾಡಲು ತನ್ನ ಎರಡನೇ ಗಂಡ ಪರಮೇಶ್ ಅಡ್ಡಿಯಾಗುತ್ತಾನೆ ಎಂಬ ಕಾರಣಕ್ಕೆ ಉಸಿರುಗಟ್ಟಿಸಿ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆಶಾ ಮತ್ತು ಚಂದ್ರಪ್ಪರನ್ನು ಪೊಲೀಸರು ಬಂಧಿಸಿದ್ದು, ಇಬ್ಬರೂ ನ್ಯಾಯಾಂಗ ಬಂಧನದಲ್ಲಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳನ್ನು ಬಳಸಿ.
ಲಿಂಗಸುಗೂರು ಮಹಿಳೆ ಕೊಲೆ: ದೇವರಾಜಿಗೆ ಜೀವಾವಧಿ ಶಿಕ್ಷೆ
ರಾಯಚೂರು: ಮೃತ ಮಹಿಳೆ ವಿಜಯಲಕ್ಷ್ಮಿ, ಪತಿಯ ಮರಣದ ನಂತರ ಯರಡೋಣದಲ್... ಓದನ್ನು ಮುಂದುವರಿಸಿ
ಲೋಕಾಯುಕ್ತ ದಾಳಿ : ರೊಟ್ಟಿ ಅಂಗಡಿ ಲೈಸೆನ್ಸ್ಗೆ ಲಂಚ ಬೇಡಿಕೆ: ಅಧಿಕಾರಿ ಬಂಧನ
ಧಾರವಾಡ: ರೊಟ್ಟಿ ಅಂಗಡಿ ಆರಂಭಿಸಲು ಲೈಸೆನ್ಸ್ ನೀಡುವ ವಿಚಾರದಲ್ಲಿ... ಓದನ್ನು ಮುಂದುವರಿಸಿ
ಬಿಗ್ ಬಾಸ್ ಕನ್ನಡ ಮಾಜಿ ಸ್ಪರ್ಧಿ ರಜತ್ ವಿರುದ್ಧ ಮತ್ತೊಂದು FIR: ಮಾನಹಾನಿ ಆರೋಪ
ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಮಾಜಿ ಸ್ಪರ್ಧಿ ರಜತ್... ಓದನ್ನು ಮುಂದುವರಿಸಿ
ಕಡಿಮೆ ಬೆಲೆಗೆ ಚಿನ್ನ ಕೊಡುತ್ತೇವೆಂದು ನಂಬಿಸಿ 15 ಲಕ್ಷ ದೋಚಿದ ಗ್ಯಾಂಗ್: ಐವರು ಅರೆಸ್ಟ್
ದೇವನಹಳ್ಳಿ: ಕಡಿಮೆ ಬೆಲೆಗೆ ಚಿನ್ನ ನೀಡುವುದಾಗಿ ನಂಬಿಸಿ 15 ಲಕ್ಷ... ಓದನ್ನು ಮುಂದುವರಿಸಿ
ಸ್ವಂತ 5 ವರ್ಷದ ಮಗಳ ಮೇಲೆ ಅತ್ಯಾಚಾರ: ತಂದೆಗೆ 20 ವರ್ಷ ಜೈಲು ಶಿಕ್ಷೆ
ವಿಜಯಪುರ: ಐದು ವರ್ಷದ ಅಪ್ರಾಪ್ತ ಸ್ವಂತ ಮಗಳ ಮೇಲೆ ಅತ್ಯಾಚಾರ ಎಸಗ... ಓದನ್ನು ಮುಂದುವರಿಸಿ
25 ಅಡಿ ಆಳ ಗುಂಡಿಗೆ ಬಿದ್ದ ಮಹಿಳೆ ಸುರಕ್ಷಿತ, ಹೊಯ್ಸಳ ಪೊಲೀಸ್ ತಂಡದ ಸಾಹಸ
ಬೆಂಗಳೂರು: ನಗರದಲ್ಲಿ ಸುಮಾರು 25 ಅಡಿ ಆಳ ಗುಂಡಿಗೆ ಬಿದ್ದ ಮಹಿಳೆ... ಓದನ್ನು ಮುಂದುವರಿಸಿ
ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ ವಿರುದ್ಧ FIR – ಬೆದರಿಕೆ ಮತ್ತು ನಿಂದನೆ ಆರೋಪ
ಬೆಂಗಳೂರು: ನಗರದಲ್ಲಿ ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ ವಿರುದ್ಧ... ಓದನ್ನು ಮುಂದುವರಿಸಿ
ಅಕ್ರಮ ವಿದೇಶಿಗರ ವಿರುದ್ಧ ಪೊಲೀಸ್ ದಾಳಿ: 200 ಮಂದಿ ಪತ್ತೆ
ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ವಿದೇಶಿ ಪ್ರಜೆ... ಓದನ್ನು ಮುಂದುವರಿಸಿ
ಆಳಂದ್
ಹೋಳಿ ಹಬ್ಬದಲ್ಲಿ ಬುರ್ಖಾ ಧರಿಸಿ ಬಣ್ಣದಾಟ – ಐವರು ಯುವಕರು ಬಂಧನ
ಕಲಬುರಗಿ: ಜಿಲ್ಲೆಯ ಆಳಂದ ತಾಲ್ಲೂಕಿನ ನಿಂಬರ್ಗಾ ಗ್ರಾಮದಲ್ಲಿ ಹೋಳ... ಓದನ್ನು ಮುಂದುವರಿಸಿ
ಕಾಲೇಜಿಗೆ ಹೋಗು ಎಂದ ತಂದೆಯ ಮಾತಿಗೆ ಮನನೊಂದು: 14 ದಿನಗಳ ಹೋರಾಟದ ಬಳಿಕ ಡಿಪ್ಲೋಮಾ ವಿದ್ಯಾರ್ಥಿ ಸಾವು
ಉಡುಪಿ: ಜಿಲ್ಲೆಯ ಕೊಲ್ಲೂರು ಸಮೀಪದ ಕೆರಾಡಿ ಗ್ರಾಮದ ಹಯ್ಯಂಗಾರುದಲ... ಓದನ್ನು ಮುಂದುವರಿಸಿ