ಗಲ್ಫ್ ಸಂಕಷ್ಟದ ಮಧ್ಯೆ ರಷ್ಯಾ ನೆರವು: ಭಾರತಕ್ಕೆ ತೈಲ ಪೂರೈಕೆ ಹೆಚ್ಚಳ
ನವದೆಹಲಿ: ಪಶ್ಚಿಮ ಏಷ್ಯಾದ ಬಿಕ್ಕಟ್ಟಿನ ಪರಿಣಾಮವಾಗಿ ಗಲ್ಫ್ ರಾಷ್ಟ್ರಗಳಿಂದ ಭಾರತಕ್ಕೆ ತೈಲ ಮತ್ತು ಅನಿಲ ಪೂರೈಕೆ ವ್ಯತ್ಯಯಗೊಂಡಿದ್ದು, ದೇಶದ ಇಂಧನ ಕ್ಷೇತ್ರ ಒತ್ತಡಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ರಷ್ಯಾ ಭಾರತಕ್ಕೆ ನೆರವಾಗಲು ಮುಂದಾಗಿರುವುದು ಮಹತ್ವದ ಬೆಳವಣಿಗೆಯಾಗಿದೆ. ರಷ್ಯಾದ ಪ್ರಥಮ ಉಪಮುಖ್ಯಸ್ಥ ಡೆನಿಸ್ ಮಂಟುರೋವ್, ಭಾರತಕ್ಕೆ ತೈಲ ಹಾಗೂ ಎಲ್ಎನ್ಜಿ ಪೂರೈಕೆಯನ್ನು ಹೆಚ್ಚಿಸಲು ಸಿದ್ಧವಿದ್ದೇವೆ ಎಂದು ತಿಳಿಸಿದ್ದಾರೆ.
ಭಾರತದ ಅಗತ್ಯತೆ ದೊಡ್ಡ ಮಟ್ಟದಲ್ಲಿರುವುದರಿಂದ, ಈಗಾಗಲೇ ರಷ್ಯಾ ಕೆಲವು ಪ್ರಮಾಣದಲ್ಲಿ ತೈಲ ಪೂರೈಸುತ್ತಿದ್ದು, ಮುಂದಿನ ದಿನಗಳಲ್ಲಿ ಪೂರೈಕೆಯನ್ನು ಇನ್ನಷ್ಟು ವಿಸ್ತರಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಈ ಹೇಳಿಕೆಯನ್ನು ಅವರು ಪ್ರಧಾನಿ ನರೇಂದ್ರ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ನೀಡಿದ್ದಾರೆ.
ಇದರ ಜೊತೆಗೆ, ಭಾರತವು ನೈಸರ್ಗಿಕ ಅನಿಲ ಪೂರೈಕೆ ವ್ಯವಸ್ಥೆಯನ್ನು ಬಲಪಡಿಸುವತ್ತ ಕ್ರಮ ಕೈಗೊಂಡಿದ್ದು, ಎಲ್ಎನ್ಜಿ ಅನಿಲವನ್ನು ಪೈಪ್ಡ್ ಗ್ಯಾಸ್ ರೂಪದಲ್ಲಿ ಮನೆಮನೆಗಳಿಗೆ ಪೂರೈಸುವ ಯೋಜನೆಗೆ ವೇಗ ನೀಡಲಾಗಿದೆ. ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ನಡುವೆಯೂ ಭಾರತ ತನ್ನ ಇಂಧನ ಭದ್ರತೆಯನ್ನು ಕಾಯ್ದುಕೊಳ್ಳಲು ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿರುವುದು ಸ್ಪಷ್ಟವಾಗಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳನ್ನು ಬಳಸಿ.
ಬಿರುಗಾಳಿ ಸಹಿತ ಭಾರೀ ಮಳೆ: ಜೈಪುರದಲ್ಲಿ ಜನಜೀವನ ಅಸ್ತವ್ಯಸ್ತ! : ಹಠಾತ್ ಹವಾಮಾನ ವೈಪರೀತ್ಯ
ಜೈಪುರ: ರಾಜಸ್ಥಾನದ ಜೈಪುರ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ... ಓದನ್ನು ಮುಂದುವರಿಸಿ
ಅಯೋಧ್ಯೆಯಲ್ಲಿ ಚಿನ್ನದ ದೋಚಾಟ: ಬುರ್ಖಾ ಧರಿಸಿದ ಮಹಿಳೆಯ ಚಾಲಾಕಿ ಕಳ್ಳತನ
ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಸಿನಿಮಾಗಳನ್ನು ನೆನಪಿಸ... ಓದನ್ನು ಮುಂದುವರಿಸಿ
ಮದುವೆಗಾಗಿ ತೂಕ ಇಳಿಸುವ ಇಂಜೆಕ್ಷನ್: ಮೌಂಜಾರೊ’–‘ವೆಗೋವಿ’ ಕ್ರೇಜ್: ವಧು-ವರರು ಔಷಧಿಗಳತ್ತ ಓಟ
ನವದೆಹಲಿ: ಮದುವೆ ಮುನ್ನ ತೂಕ ಇಳಿಸಲು ವಧು-ವರರು ಹೊಸ ಟ್ರೆಂಡ್ಗೆ... ಓದನ್ನು ಮುಂದುವರಿಸಿ
ಸುಪ್ರೀಂ ಕೋರ್ಟ್ ಸೂಚನೆ: ನ್ಯಾಯಾಧೀಶರ ಘೇರಾವ್ ಕೇಸ್ ಎನ್ಐಎಗೆ
ನವದೆಹಲಿ: ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಏಪ್ರಿಲ್ 1ರಂದು... ಓದನ್ನು ಮುಂದುವರಿಸಿ
ಎತ್ತಿನಹೊಳೆ ಯೋಜನೆಗೆ ಗ್ರೀನ್ ಸಿಗ್ನಲ್: 277 ಎಕರೆ ಅರಣ್ಯ ಭೂಮಿ ಬಳಕೆಗೆ ಅನುಮತಿ
ನವದೆಹಲಿ: ಎತ್ತಿನಹೊಳೆ ಯೋಜನೆಗೆ ಕೇಂದ್ರ ಸರ್ಕಾರ ಮಹತ್ವದ ತೀರ್ಮಾ... ಓದನ್ನು ಮುಂದುವರಿಸಿ
ಮಗಳನ್ನು ಕೊಂದು ‘ನರಬಲಿ’ ನೀಡಿದ ತಾಯಿ, ಮೂವರು ಅರೆಸ್ಟ್
ಜಾರ್ಖಂಡ್: ಕುರುಡು ನಂಬಿಕೆಯ ಹೆಸರಿನಲ್ಲಿ ನಡೆದ ಭೀಕರ ಘಟನೆ ಒಂದು... ಓದನ್ನು ಮುಂದುವರಿಸಿ
ಐಟಿ ವಲಯಕ್ಕೆ ಶಾಕ್: ಒರಾಕಲ್ ಉದ್ಯೋಗ ಕಡಿತ - ಸಾವಿರಾರು ಉದ್ಯೋಗಿಗಳಿಗೆ ಹೊಡೆತ
ನವದೆಹಲಿ : ಅಮೆರಿಕದ ದೈತ್ಯ ಐಟಿ ಕಂಪನಿಯಾದ Oracle Corporation... ಓದನ್ನು ಮುಂದುವರಿಸಿ
ಮತ್ತೆ ಬಿಜೆಪಿ ಸರ್ಕಾರ: ಅಸ್ಸಾಂ ಜನರ ಬೆಂಬಲ ನಮ್ಮೊಂದಿಗೇ – ಮೋದಿ
ಗುವಾಹಟಿ: ಕಳೆದ ಹತ್ತು ವರ್ಷಗಳಲ್ಲಿ ಅಸ್ಸಾಂ ರಾಜ್ಯವು ಗಮನಾರ್ಹ ಅ... ಓದನ್ನು ಮುಂದುವರಿಸಿ
ಮಕ್ಕಳಿಲ್ಲದ ಮಹಿಳೆಯ ಆಸ್ತಿ ಪತಿಗೆ ಅಲ್ಲ: ಹೈಕೋರ್ಟ್ ಸ್ಪಷ್ಟನೆ
ಅಮರಾವತಿ: ಮಹಿಳೆಯರ ಉತ್ತರಾಧಿಕಾರ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ... ಓದನ್ನು ಮುಂದುವರಿಸಿ
ಇಂಧನ ದರ ಏರಿಕೆ – ವಾಹನ ಮಾಲೀಕರಿಗೆ ಮತ್ತೊಂದು ಶಾಕ್
ನವದೆಹಲಿ: ಇಂಧನ ದರ ಏರಿಕೆ ಹಿನ್ನೆಲೆಯಲ್ಲಿ ವಾಹನ ಮಾಲೀಕರಿಗೆ ಮತ್... ಓದನ್ನು ಮುಂದುವರಿಸಿ